ವಸಂತ

ವಸಂತ ಬಾ ಹಸಿರೆಲ್ಲವೂ
ಒಂದಾಗಿ ಜೀವದ ಫಲ ಆರಿಸುತಲಿದೆ
ನಿನ್ನ ಮಾಂತ್ರಿಕ ಸ್ಪರ್ಶ ಛಂದದ ಪರಾಕ್ರಮ
ಹುಟ್ಟುತ್ತಲಿವೆ ಹೊಸ ಹೊಸ ಚಿಗುರುಗಳು
ಹೊಸ ಜಾತ್ರೆ ಹೊಸ ತೇರುಗಳು
ಬೇಸಿಗೆ ಹರಡಿ ಬಿರು ಬಿಸಿಲು ಅರಳಿವೆ|

ಒಂದಾಗುವ ಪಿಂಡ ಮರು ಹುಟ್ಟು
ಪಡೆದ ಗಳಿಗೆ ಯುಗಾದಿ ಹೊಸವರ್ಷ
ನೆನಪಿನ ಕೋಗಿಲೆಯ ಕೊರಳು ಹೊರಳಾಡುವ
ಇರುಳು ನೇಯುವ ಕಂಬಳಿಗಳ ಸುತ್ತ
ಸತ್ವ ಸಂಸ್ಕೃತಿ ಪೊಟರೆಯಲಿ ಚಿಲಿಪಿಲಿ ಗಾನ
ಎದೆಯ ಆಳಕೆ ನೀ ಬರೆದ ಕವಿತೆ|

ಬಾ ವಸಂತ ನದಿಯ ದಡಕೆ
ಕೈ ಮುಗಿವೆ ನೆನೆದ ಮನದಲಿ
ಎರಡರ ನಡುವೆ ಒಂದು ಒಲವ ಹರಡಿ
ಉಸಿರೇ ಹಸಿರಾಗುವ ಗುಹೇಶ್ವರನ ಬಯಲು
ಎಲ್ಲಿಯೂ ನಿಲ್ಲದ ಜೀವಭಾವ
ವಿದಾಯವಿಲ್ಲದ ಬೆಳಕು ನಡಿಗೆ|

ಹೇಳು ವಸಂತ ಚಿಗುರಿಗೆ ಕೆಂಬಣ್ಣ
ಸೂಸಿ ಹುಟ್ಟುವ ಸೂರ್ಯನ ಜೊತೆ ಸರಸ
ದೋಣಿ ತೇಲಿದ ನದಿಯ ಅಲೆಗುಂಟ
ಗಾಳಿ ಗಂಧ ಹೂವು ಚಿಟ್ಟೆ ಚಿಲಿಪಿಲಿ
ಜಗದ ಗಂತವ್ಯ ಮುಗಿಲ ಮುಟ್ಟುವ ಹಂತ
ಮೋಡಗಳಾಗಲು ಕಾತರಿಸಿದ ಹಸಿಗಳು|

ಎಲ್ಲೆಲ್ಲೂ ಮುರಳಿಯ ನಾದಲೋಕ
ಜಗದ ವಿಸ್ಮಯಗಳ ಸಂಕೇತಗಳು
ನೀ ಬಂದರೆ ಹಾದಿ ಬೀದಿಯ ತುಂಬ
ಬೆಳಕು ಬೆಳದಿಂಗಳು ಪಸರಿಸಿ ಹಾಯಿ
ಎದೆಯ ಭಾವಕೆ ಹಾಡಾದ ಗೀತೆಗಳು
ಮತ್ತೆ ಎಲ್ಲವೂ ನೆನಪಾದ ಲಹರಿಯ ಪಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುರುಕು ಮಂಟಪ
Next post ಅಮೃತ ಮಂಥನ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys